"ಭೂಮಿಯ ಮೇಲಿನ ಪ್ರತಿಯೊಂದು ವಸ್ತುವೂ ಸಕ್ಕರೆ ಮರಳುಗಳ ಮಿಶ್ರಣವೇ. ಬುದ್ದಿಶಾಲಿಯಾದ ಇರುವೆಯಂತೆ ಸಕ್ಕರೆಯನ್ನು ಮಾತ್ರ ಗ್ರಹಿಸಿ ಮರಳು ಕಣಗಳನ್ನು ಬಿಟ್ಟುಬಿಡಬೇಕು." — ಮಹಾವತಾರ ಬಾಬಾಜಿ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

Free Website Templates

Monday, April 4, 2011

ಹೊಸ ವರುಷಕೆ ಹೊಸತಾಗಿ


· ಹೊಸ ವರುಷವು ಶುಭ್ರವಾದ ಪುಟಗಳಿರುವ ಖಾಲಿ ಪುಸ್ತಕದಂತೆ. ವರ್ಷದ ಕೊನೆಯಲ್ಲಿ ಹಿಂತಿರುಗಿ ನೋಡಿದಾಗ ವಿಷಾದವಿಲ್ಲದೇ ಹರುಷವ ನೀಡುವ ರೀತಿಯಲ್ಲಿ ಅದರ ಪ್ರತಿ ಪುಟಗಳನ್ನೂ ತುಂಬಿಸೋಣ.

· ಹೊಸ ಆರಂಭ ಹೊಸ ವರ್ಷದಲ್ಲಿ ಮಾತ್ರವಲ್ಲ, ಪ್ರತಿ ಮುಂಜಾವಿನಲ್ಲೂ ಆಗುತ್ತದೆ. ಹೊಸತಾದ ಮತ್ತು ಸರಿಯಾದ ರೀತಿಯಲ್ಲಿ ಪ್ರಾರಂಭಿಸಲು ಅವಕಾಶವೀಯುತ್ತದೆ.

· ಹೊಸ ವರ್ಷದಲ್ಲಿ ಹಿಂದಿನದನ್ನು ಅರ್ಥವಂತಿಕೆಯಿಂದ, ಮುಂದಿನದನ್ನು ವಿಶ್ವಾಸದಿಂದ ಹಾಗೂ ಸುತ್ತಲೂ ಪ್ರೀತಿಯಿಂದ ನೋಡೋಣ.

· ನಾವು ನಮ್ಮ ಜೀವನವನ್ನು ಪ್ರತಿ ವರುಷ, ಪ್ರತಿ ದಿನ, ಪ್ರತಿ ಕ್ಷಣ ರುಪಿಸಿಕೊಳ್ಳುತ್ತೇವೆ. ನಮ್ಮ ಜೀವನ ಯಾವ ರೂಪ ಪಡೆಯುತ್ತದೆ ಎಂದು ತಿಳಿಯಲು ಹೊಸ ವರುಷ ಸರಿಯಾದ ಸಮಯ.

· ನಮ್ಮ ಜೀವನವನ್ನೊಮ್ಮೆ ಪುನರಾವಲೋಕಿಸಿದಾಗ ನಿಸ್ವಾರ್ಥ ಪ್ರೇಮದಿಂದ ಮಾಡಿದ ಕೆಲಸಗಳೇ ನಮಗೆ ಸಾರ್ಥಕ ಭಾವನೆ ನೀಡುವುದೆಂದು ತಿಳಿಯುತ್ತದೆ.

· ನಾವು ಕಳೆದುಹೋದ ಕಾಲಕ್ಕೇ ಜೋತುಬಿದ್ದಿರಬೇಕೆಂದಿಲ್ಲ. ಅದು ಕಳೆದ ವರುಷವಿರಲೀ ಅಥವಾ ನೆನ್ನೆಯಷ್ಟೇ ಆಗಿರಲಿ. ಈ ದಿನ ಹೊಚ್ಚ ಹೊಸತು, ಒಂದು ಹೊಸ ಅವಕಾಶ. ಹೊಸ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸರಿಯಾದ ಸಮಯ.

· ನಮ್ಮನ್ನು ಬದಲಿಸಿಕೊಳ್ಳಲು ನಮ್ಮಿಂದ ಸಾಧ್ಯವಿಲ್ಲವೆಂದಾದಲ್ಲಿ, ನಮ್ಮಲ್ಲಿರುವ ದೈವತ್ವಕ್ಕೆ ಖಂಡಿತಾ ಸಾಧ್ಯವಿದೆ. ಆ ದೈವತ್ವವನ್ನು ಜಾಗೃತಗೊಳಿಸೋಣ.

· ಹೊಸ ವರುಷ ಭವಿಷ್ಯದತ್ತ ನೋಡುವ ಸಮಯವಷ್ಟೇ ಅಲ್ಲ, ಭವಿಷ್ಯವೇ ಇಲ್ಲಿದೆ ಎಂದು ತಿಳಿಯುವ ಸಮಯ.

· ಹೊಸ ವರುಷ ನಮಗೇನು ತರುವುದೆನ್ನುವುದು ಹೊಸ ವರುಷಕ್ಕೆ ನಾವೇನು ತರುತ್ತೇವೆನ್ನುವುದನ್ನು ಅವಲಂಬಿಸಿರುತ್ತದೆ.

· ಹಳೆಯದನ್ನು ಕೈ ಬಿಟ್ಟು ಭವಿಷ್ಯದ ದಾರಿಯಲ್ಲಿ ದೃಡತೆ ಮತ್ತು ವಿಶ್ವಾಸದಿಂದ ಹೆಜ್ಜೆ ಹಾಕೋಣ.

- ಸಂಗ್ರಹಾನುವಾದ

ಎಲ್ಲರಿಗೂ ಯುಗಾದಿಯ ಶುಭಾಶಯಗಳು